ಖರ್ಜುರ ಮಹತ್ವ ತಿಳಿದಿದೆಯೇ??? ಹಲವು ರೋಗಗಳಿಗೇ ರಾಮ ಬಾಣ ಖರ್ಜುರಾ..!

 





ಖರ್ಜುರದ ಹಣ್ಣಿನಲ್ಲಿ ವಿಟಮಿನ್ ಹೇರಳವಾಗಿ ದೊರೆಯುತ್ತದೆ. ಇದರ ಸೇವನೆಯಿಂದ ಮೂತ್ರ ಕಟ್ಟದೆ ಸರಾಗವಾಗಿ ವಿಸರ್ಜನೆಯ ಕಾರ್ಯ ನಡೆಯುವುದು. ಇದು ಜೀರ್ಣಕಾರಿಯೂ ಹೌದು. ಪ್ರದಿದಿನ ಊಟ ಆದ ನಂತರ ಒಂದೊಂದು ತಿನ್ನುವುದರಿಂದ ನೀವು ತಿಂದಂತ ಆಹಾರ ಸುಲಭವಾಗಿ ಪಚನ ಆಗುವುದು.

 

ಮಕ್ಕಳಿಗೆ ಹಾಲುಣಿಸುವ ತಾಯಂದಿರು ಹಣ್ಣನ್ನು ತಿನ್ನುವುದರಿಂದ ಸ್ತನಗಳಲ್ಲಿ ಹೆಚ್ಚಾಗಿ ಹಾಲು ತುಂಬುವುದು. ರಕ್ತ ಶುದ್ದಿ ಆಗುವುದಲ್ಲದೆ ಹಂಮ್ನಿನ ಸೇವನೆಯಿಂದ ಚರ್ಮರೋಗವನ್ನು ಕೂಡ ದೂರವಿಡಬವುದು.





 

ಹಣ್ಣಿನ ಬೀಜಗಳನ್ನು ನುಣ್ಣಗೆ ಅರೆದು ಜೇನುತುಪ್ಪ ಸೇರಿಸಿ ದಿನಾವೂ ಸೇವಿಸುವುದರಿಂದ ವೀರ್ಯ ವೃದ್ಧಿ ಆಗುವುದು. ಲೈಂಗಿಕ ಕ್ರಿಯೆಯಲ್ಲಿ ಉತ್ಸಾಹ ಹೆಚ್ಚುವುದು.ಉಪ್ಪು ಹಾಗು ಕಾಳುಮೆಣಸಿನ ಪುಡಿಯೊಂದಿಗೆ ಬಳಸುವುದು ಆರೋಗ್ಯಕರ.

 

ಖರ್ಜುರವನ್ನು ಅಡುಗೆಗಳಲ್ಲಿ ಬಳಸಿ ನಾನಾ ತರಹದ ರೆಸಿಪಿಗಳನ್ನು ಮಾಡುತ್ತೇವೆ ಹಾಗು ಕೆಲವೊಂದು ಸಾರಿ ಬರಿ ಖರ್ಜುರವನ್ನು ಸೇವಿಸುತ್ತಿರುತ್ತೇವೆ ಆದರೆ ಅದರಲ್ಲಿರುವ ಲಾಭದಾಯಕ ಅಂಶಗಳನ್ನು ತಿಳಿದಿರುವುದಿಲ್ಲ. ಹಾಗಾಗಿ ಮೂಲಕ ತಿಳಿದು ಇದರ ಲಾಭಗಳನ್ನು ಪಡೆದುಕೊಳ್ಳಿ.

ಪ್ರತಿದಿನ ಖರ್ಜುರವನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಹಲವು ಪೋಷಕಾಂಶಗಳು ಸಿಗುತ್ತವೆ, ಇದರಲ್ಲಿ ಪೊಟ್ಯಾಶಿಯಂ ಕಬ್ಬಿಣದಂಶ ಇರುವುದರಿಂದ ದೇಹದಲ್ಲಿನ ಹಲವು ಬೆಳವಣಿಗೆಗೆ ಹೆಚ್ಚು ಪೂರಕವಾಗಿದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಪಡೆಯಬಹುದಾಗಿದೆ.

ರಕ್ತ ಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ, ಹಾಗು ರಕ್ತದ ಸಂಚಲನಕ್ಕೆ ತುಂಬಾನೇ ಒಳ್ಳೆಯದು. ಮೆದುಳಿನ ಹಾಗು ಹೃದಯದ ಆರೋಗ್ಯಕ್ಕೆ ಖರ್ಜುರ ಹೆಚ್ಚು ಸಹಕಾರಿಯಾಗಿದೆ. ದೇಹದಲ್ಲಿನ ನಿಶಕ್ತಿ ಹಾಗು ಮಲಬದ್ಧತೆ ನಿವಾರಣೆ ಮಾಡಿಕೊಳ್ಳಬಹುದಾಗಿದೆ.

Comments

Popular posts from this blog

ಪಪ್ಪಾಯ ಹಣ್ಣಿನ ಲಾಭ.